ಆಕ್ರೋಶ

ಹೊಸತನವ ಅರಸುತ
ಮನದಿ-ಮುದಡಿ
ಆಕ್ರೋಶದಿ ಅರಚುತ
ಕೊರಗುವ ಕರಳು
ನೋವು ಅರಿಯುವರಾರು

ಹಟ್ಟಿ… ಬೆಟ್ಟಗಳ
ನಡುವಲಿ.. ಹುಟ್ಟಿ
ಬೆಳೆದು ಬಾಳಿದ
ದಶ-ದಶಕಗಳ
ಕಾಲ ಗತಿಸಿದರೂ
ಕಾಣದು-ತಿಳಿಯದ
ಹೊಸ ಬಗೆಯ..
ಹಸನ ಬದುಕು

ಕಾಡು… ಮೋಡಗಳ
ದಟ್ಟ ಕಣಿವೆಯಲಿ
ಕಠಿಣತೆಯ ಕಲ್ಲಾಗಿ
ರಕ್ತ… ದಾಹದಿ…
ಸಾಗುತಿರುವೆವು ನಾವೆಲ್ಲಾ
ಮೃಗಗಳಾಗುತ ಹಗೆತನದಿ

ಅಭಿವೃದ್ಧಿಯ ಅರೆ…
ಭರವಸೆಯಲಿ ಶೋಷಿಸುತ
ಅರೆನಗ್ನ ಜೋಗುತಿಗಳಾಗಿ
ತಿಮಿಂಗಲ ರೂಪದ
ಅಧಿಕಾರಿ-ರಾಜಕೀಯ
ಹೃದಯ-ಹೀನರು
ಕೊಳ್ಳೆ ಹೊಡೆಯುತಿಹರು
ಸರ್ಕಾರಿ ಬೊಕ್ಕಸವಾ

ಇರುವ-ನಮ್ಮಷ್ಟಕ್ಕೆ
ನಾವುಗಳು…
ನಿಸರ್ಗದ ವಾತ್ಸಲ್ಯದ
ಭೂಮಿ-ಆಕಾಶಕೆ…
ಕೈಮುಗಿದು… ಮಣ್ಣಲ್ಲಿ
ಕಣ್ಣಿಟ್ಟು ಬದುಕುವ
ಬಾಳ ಬಳ್ಳಿಯನೆ
ಕಡಿದು ಚೆಲ್ಲುವ
ಗೋಮುಖ ಕಿರಾತರು
ಸುಸಂಸ್ಕೃತ ಸೋಗಿನ
ರೂಪ ತೋರಿಸುತ
ಇರಿತದಿ ದಾಳಿಯಿಡುತ
ನಮ್ಮುಸಿರಿನ ಹಸಿರು
ನೆಲ… ಜಲ… ತಾಣ
ಬರಿದಾಗಿಸುತ ಬರಡು
ಮಾಡುತಿಹರು ಸಭ್ಯರು

ಕಣ್ಣು ಬಿಟ್ಟಾರೇನು ಇವರು
ನಮ್ಮ ಆಕ್ರೋಶದ
ಜನಪದ ದನಿಯ
ಸದ್ದು ಅಪ್ಪಳಿಸುತ
ಎದ್ದೇಳುವ ಮುನ್ನ…

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಟ್ಟಗರತಿಯ ಕಾಣಲಿಲ್ಲಾ
Next post ಬೆಸುಗೆ-ವಸುಗೆ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys